ಶ್ರೀದತ್ತ ಕ್ರಿಯೇಷನ್ಸ್ ಲಾಂಛನದಲ್ಲಿ ಪಿ.ವೆಂಕಟ್, ಬಿ.ಸುಕುಮಾರ್ ಹಾಗೂ ಸುಬ್ಬರಾವ್ ಅವರು ನಿರ್ಮಿಸುತ್ತಿರುವ ‘ಪ್ರತ್ಯಕ್ಷ ದೈವ ಶಿರಡಿ ಸಾಯಿ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ವಿದ್ಯಾರಣ್ಯಪುರದ ಶ್ರೀಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ನದೆಯಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಎಂ.ಆರ್.ರೆಡ್ಡಿ ಅವರು ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ೨೦ ದಿನಗಳ ಚಿತ್ರೀಕರಣ ನಡೆಯಲಿದೆ.
ಜಿ.ಕೆ.ರವಿರಾಜ್ ಅವರು ಹಾಡುಗಳು ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಸತ್ಯನಾರಾಯಣ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಿಸನ್ ವಾಡಿಯಾ ಸಂಗೀತ ನಿರ್ದೇಶನ, ವಿ.ಜಿ.ಸುಗಮುರುಗನ್ ಛಾಯಾಗ್ರಹಣ ಹಾಗೂ ಎನ್.ಸತೀಶ್ ಕುಮಾರ್ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
ಎಂ.ಆರ್.ರೆಡ್ಡಿ ಅವರು ಸಾಯಿಬಾಬಾ ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಅಭಿಮನ್ಯು, ‘ಸಾರಥಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಸೀತಾ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭಾನುಚಂದರ್, ವಿಜೇತ, ಕೃಷ್ಣರಮೇಶ್, ಸತೀಶ್, ಏಕನಾಥ್ ನಗರಕರ್, ಪ್ರಶಾಂತ್, ರಾವಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.